ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ…
ಕಾವ್ಯ ಸಂಗಾತಿ ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ-ದೀಪಾವಳಿಯ ದಿನ… ಪುಟ್ಟ ಹುಡುಗ ಕಾಯುತ್ತಾನೆನೆಲಚಕ್ರ, ಸುರುಸುರು ಬತ್ತಿ,ರಾಕೆಟ್, ಬಾಂಬ್ ಕೈಯ್ಯಲ್ಲಿ ಹಿಡಿದುಕತ್ತಲು ಕವಿಯುವ ಸಮಯಕ್ಕಾಗಿಸಿಡಿಯುವ ಪಟಾಕಿಗಳದ್ದೇ ಕನಸುಅವನ ಕಣ್ಣತುಂಬಾ ಏರಿದ ಬೆಲೆಏರದ ಜೇಬಿನ ತೂಕದ್ದೇ ಚಿಂತೆಈಸೀಚೇರಿನಲ್ಲಿ ಕುಳಿತ ಅಪ್ಪನಿಗೆ ಅಮ್ಮ ಅಡುಗೆಕೋಣೆಯಲ್ಲಿರುತ್ತಾಳೆಮನೆಯವರ ಬಾಯಿರುಚಿ ತೀರಿಸುವಹೊಣೆಯನ್ನು ಹೆಗಲಲ್ಲಿ ಹೊತ್ತುಕೊಂಡು ಪುರಾಣಗ್ರಂಥಗಳನ್ನು ಓದುತ್ತಾಎಂಜಲು ಬೆರಳಲ್ಲಿಯೇನರಕಾಸುರ- ಬಲೀಂದ್ರರನ್ನುಕೊಲ್ಲುತ್ತಾರೆ ಅಜ್ಜ ಕಣ್ಣು ಹಣ್ಣಾದ ಅಜ್ಜಿಗೆ‘ಬಾಯಾರಿದ’ ಬತ್ತಿಮುಗಿಯುತ್ತಾ ಬಂದ ಜೀವತೈಲನಂದುವುದಕ್ಕೆ ಸಿದ್ಧವಾದಬೆಳಕೇ ಕಾಣುತ್ತದೆ
Copy and paste this URL into your WordPress site to embed
Copy and paste this code into your site to embed